“ಪೂಜಾರಿ-ಟು-ಪೂರ್ಣಾತ್ಮ”

 

“ಪೂಜಾರಿ”

  • ಎಲೆಗಳನ್ನು, ಹೂವುಗಳನ್ನು ಕೀಳುವುದು, ಕೀಳಿಸುವುದರಿಂದ ಪ್ರಕೃತಿಯನ್ನು ನಾಶ ಮಾಡುವವನು.
  • ಚಿಕ್ಕ ಮಕ್ಕಳು ಬೊಂಬೆಗಳಿಂದ ಆಡಿಕೊಳ್ಳುವಹಾಗೆ, ದೊಡ್ಡ ಬೊಂಬೆಗಳಾದ ವಿಗ್ರಹಗಳಿಂದ ಆಡಿಕೊಳ್ಳುವ ’ಹಿರಿಯ ಬಾಲಕನು’.

“ಮಂತ್ರೋಪಾಸಕನು”

  • ಸ್ವಲ್ಪ ಬೆಳೆದಿರುವವನು. ಬೊಂಬೆಯಾಟ ಬಿಟ್ಟಿರುವವನು. ಸಾಧನೆಯನ್ನು ನಂಬಿಕೊಂಡಿರುವವನು. ಆದರೂ, ತನ್ನಲ್ಲೇ ಎಲ್ಲಾ ಶಕ್ತಿಗಳಿವೆಯೆಂದು ಗ್ರಹಿಸಿದರೂ, ಆ ಶಕ್ತಿಯನ್ನು ಹೊರತೆಗೆಯಲು ಯಾವ ಸಾಧನೆಯನ್ನೂ ಮಾಡದ ಮೂರ್ಖನು.

“ವೇದಾಂತಿ”

  • ಪ್ರಕೃತಿಯನ್ನು ನಾಶ ಮಾಡದ ಪಂಡಿತನು. ಆತ್ಮತತ್ವವನ್ನು ಗ್ರಹಿಸಿದರೂ, ತನ್ನಲ್ಲೇ ಶಕ್ತಿಗಳೆಲ್ಲಾ ಇವೆಯೆಂದು ಗ್ರಹಿಸಿದರೂ, ಆ ಶಕ್ತಿಯನ್ನು ಹೊರಗೆ ತೆಗೆಯಲು ಯಾವ ಸಾಧನೆಯನ್ನೂ ಮಾಡದ ಮೂರ್ಖನು. ತನ್ನ ಪದಜಾಲಕ್ಕೆ, ವಾಕ್‌ಚಾತುರ್ಯಕ್ಕೆ, ತಾನೇ ಮುಗ್ಧನಾಗುವ ಹುಚ್ಚನು.

 

“ಧ್ಯಾನಸಾಧಕನು”

  • ನಿಜವಾದ, ಬುದ್ಧಿವಂತ ಮನುಷ್ಯ, ತನ್ನಲ್ಲೇ ಶಕ್ತಿಗಳೆಲ್ಲಾ ಇವೆಯೆಂದು ಗ್ರಹಿಸಿ ತಕ್ಷಣ ಆ ಶಕ್ತಿಯನ್ನು ಹೊರಗೆ ತೆಗೆಯಲು ಮಾಡಬೇಕಾದ ಧ್ಯಾನ ಸಾಧನೆಯಲ್ಲಿ ಪೂರ್ಣವಾಗಿ ಮಗ್ನವಾಗಿರುವವನು.

“ಅವಧೂತ”

  • ಧ್ಯಾನಾನುಭವಗಳಲ್ಲಿ ತುಂಬಾ ಮುಂದುವರಿದಿರುವವನು. ನಿರಂತರವಾಗಿ ಇತರೆ ಲೋಕಗಳಲ್ಲಿ ಸೂಕ್ಷ್ಮಶರೀರ ಯಾತ್ರೆ ಮಾಡುವವನು. ಆದರೆ, ಈ ಶರೀರವನ್ನು ಈ ಲೋಕವನ್ನು ನೂರಕ್ಕೆ ತೊಂಬತ್ತು ಭಾಗ ತ್ಯಜಿಸಿರುವವನು. ಆದ್ದರಿಂದಲೇ, ’ಹುಚ್ಚ’ನೆಂದು ಈ ಲೋಕದ ಹುಚ್ಚರು ಎಂದುಕೊಳ್ಳುತ್ತಾರೆ.

“ಸಿದ್ಧನು”

  • ಧ್ಯಾನ ಪರಮಾವಧಿಯನ್ನು ಹೊಂದಿರುವವನು. ಅಷ್ಟ ಸಿದ್ಧಿಗಳನ್ನು ಕರಗತ ಮಾಡಿಕೊಂಡಿರುವವನು. ಪ್ರಪಂಚ ಈತನ ಸಿದ್ಧಿಗಳನ್ನು ನೋಡಿ ಭಯಪಡುತ್ತದೆ; ಆಶ್ಚರ್ಯಪಡುತ್ತದೆ.

 

“ಬುದ್ಧನು”

  • ಎಲ್ಲರ ಸಿದ್ಧತ್ವಕ್ಕೆ, ಬುದ್ಧತ್ವಕ್ಕೆ ದಾರಿ ತೋರಿಸುವವನು, ಕೊನೆಯ ಜನ್ಮದಲ್ಲಿರುವವನು, ನಿರಂತರ ಧ್ಯಾನ, ಜ್ಞಾನ ಬೋಧನೆ ಮಾಡಿ ಆ ಹಸಿವು ಸಹ ತೀರಿದ ನಂತರ ಪುನಃ ಜನ್ಮ ತೆಗೆದುಕೊಳ್ಳದೇ ಇರುವವನು.

 

“ಒಂದುಪೂಣಾತ್ಮ”

  • ಸತ್ಯ ಲೋಕದಲ್ಲಿ ’ತಾರೆ’ಯಾಗಿ ಶಾಶ್ವತವಾಗಿ ಉಳಿದು, ತನ್ನೊಳಗಿಂದ ನೂತನ ಅಂಶಾತ್ಮಗಳನ್ನು ಸೃಷ್ಟಿಸಿ, ಅವರನ್ನು ಜನನ-ಮರಣ ಚಕ್ರದಲ್ಲಿ ಪ್ರವೇಶಿಸುವ ಹಾಗೆಮಾಡಿ ಅವರು ಸಹ ಬುದ್ಧರಾಗುವವರೆಗೂ ಅವರ ಕಷ್ಟ-ಸುಖಗಳನ್ನು ನೋಡಿಕೊಳ್ಳುವವನು.

 

’ಸಿದ್ಧನು’ ಆಗಬೇಕಾದರೇ ಧ್ಯಾನ ಮಾಡಬೇಕು.

“ಸಿದ್ಧತ್ವಕ್ಕೆ ದಾರಿ ತೋರಿಸುವುದು” ಎಂದರೇ ಧ್ಯಾನ ಮಾಡಿಸುವುದು.

’ಬುದ್ಧನು’ ಆಗಬೇಕಾದರೇ ಧ್ಯಾನ ಜ್ಞಾನ ಬೋಧನೆ ನಿರಂತರ ಮಾಡಬೇಕು.

“ಬುದ್ಧತ್ವಕ್ಕೆ ದಾರಿ ತೋರಿಸುವುದು” ಎಂದರೆ ಎಲ್ಲರನ್ನೂ ಧ್ಯಾನ ಜ್ಞಾನ ಬೋಧಕರನ್ನಾಗಿ ತಯಾರು ಮಾಡುವುದು.