“ಧ್ಯಾನ ವರ”

“ನಿದ್ರೆಯಲ್ಲಿ ನಮ್ಮ ಶರೀರದ ಅರಿವು ನೆನಪಿರುವುದಿಲ್ಲ. ನಿದ್ರೆ ಪ್ರಕೃತಿ ಕೊಟ್ಟ ವರ; ಆದರೆ, ಮನುಷ್ಯ ತನ್ನಷ್ಟಕ್ಕೆ ತಾನೇ ನೀಡಬೇಕಾದ ವರ ಧ್ಯಾನ. ‘ ಶರೀರವನ್ನು ಮರೆತರೆ ನಿದ್ರೆ. ಮನಸ್ಸನ್ನು ಮರೆತರೆ ಧ್ಯಾನ ’ ನಮಗೆ ಯಾವ ವೈದ್ಯರೂ ಬೇಕಾಗಿಲ್ಲ. ಯಾವ ಔಷಧಿಗಳ ಅವಶ್ಯಕತೆಯೂ ಇಲ್ಲ. ನಾವು ಅನವಶ್ಯಕತೆಯ ಮಾತು ಒಂದು ಸಹ ಮಾತನಾಡದೇ ಹೋದರೆ, ಅನವಶ್ಯದ ಯೋಚನೆ ಒಂದು ಸಹ ಮಾಡದೆ ಹೋದರೆ, ಮಾಂಸ ತಿನ್ನುವುದು ಬಿಟ್ಟರೆ – ಅದು ಸಾಕು.”