“ಆತ್ಮಶಾಸ್ತ್ರ”

 

ಶ್ವಾಸ … ಮೂಗಿನೊಳಗಿನ ಗಾಳಿ …”

ಶ್ವಾಸವೇ ನಮ್ಮ ಪ್ರಾಣ. ’ ಶ್ವಾಸ ’ವಿಲ್ಲದೇ ನಾವು ಜೀವಿಸಲಾಗುವುದಿಲ್ಲ. ’ ಶ್ವಾಸ ಶಕ್ತಿ ’ ಎಲ್ಲಕ್ಕಿಂತಾ ಮಹತ್ತರವಾದ ಶಕ್ತಿ. ಪ್ರತಿಯೊಬ್ಬರಿಗೂ ಈ ಶಕ್ತಿಯ ಅವಶ್ಯಕತೆ ಇದೆ … ವೃಕ್ಷಗಳಿಗೆ, ಪ್ರಾಣಿಗಳಿಗೆ, ಪಕ್ಷಿಗಳಿಗೆ … ಕೊನೆಗೆ ನೀರಿಗೆ ಸಹ ಈ ಶಕ್ತಿಯ ಆವಶ್ಯಕತೆ ಇದೆ ಎಂಬುವ ವಿಷಯ ಹಲವು ಶಾಸ್ತ್ರಜ್ಞರಿಗೆ ಮಾತ್ರವೇ ತಿಳಿದಿದೆ. ಹಾಗೆಯೇ, ಮಾನವರಿಗೆ ಖಂಡಿತಾ ಬೇಕಾಗಿರುವ ಶಕ್ತಿಯೇ ಈ ’ ಶ್ವಾಸಶಕ್ತಿ ’.

ಆದರೆ, ಆ ವಿಷಯವನ್ನು ತಿಳಿದುಕೊಳ್ಳುವುದು ಹೇಗೆ ? ಈ ’ಶ್ವಾಸಶಕ್ತಿ’ಯ ಹಿರಿಮೆಯನ್ನು ಸರಿಯಾಗಿ ಅನುಭವಿಸುವುದು ಹೇಗೆ ?

’ಶ್ವಾಸಶಕ್ತಿ ’ಗೆ ಇರುವ ಅತ್ಯುನ್ನತ ಸಾಮರ್ಥ್ಯವನ್ನು ಅನುಭವಿಸುವ ಮಾರ್ಗ, ಆ ’ಶಕ್ತಿಪಾತ’ದ ಜೊತೆ ಕೂಡಿರುವುದೇ. ಅಂದರೆ, ಆ ’ ಶ್ವಾಸಧಾರೆ ’ಯ ಜೊತೆ ಸಹಜೀವನವನ್ನು ಮಾಡುವುದು.

 

“ಶ್ವಾಸ … ಸಹಜ ಶ್ವಾಸಕ್ರಿಯೆ” 

ಶ್ವಾಸಶಕ್ತಿಯನ್ನು ಕುರಿತು ತಿಳಿದುಕೊಳ್ಳಬೇಕಾದರೆ ನಾವು ಸಹ ಶ್ವಾಸದ ಜೊತೆ ಕೊಡಿರಬೇಕು. ಆದರೆ, ಶ್ವಾಸದ ಜೊತೆ ಇರುವುದು ಹೇಗೆ? ಹೇಗೆ? – ಅಂದರೆ .. ಆ ಪದ್ಧತಿಯನ್ನು ಪ್ರಯತ್ನಿಸಿನೋಡಿ …

ಭಾರವಾಗಿಯಾಗಲಿ, ಬಲವಂತವಾಗಿಯಾಗಲಿ, ಪ್ರಯತ್ನಪೂರ್ವಕವಾಗಿಯಾಗಲಿ ಶ್ವಾಸವನ್ನು ತೆಗೆದುಕೊಳ್ಳಬಾರದು. ಸಾಧಾರಣವಾಗಿ ತನಗೆತಾನೇ ನಡೆಯುವ ಶ್ವಾಸ ಪ್ರಕ್ರಿಯೆಯನ್ನು ತಾನಾಗಿಯೇ ನಡೆಯಲು ಬಿಡಬೇಕು. ಸ್ವತಃ ತನಗೆತಾನೇ ನಡೆಯುತ್ತಿರುವ ಸಾಧಾರಣ ಶ್ವಾಸಕ್ರಿಯವನ್ನೇ ಗಮನಿಸಬೇಕು. ತದೇಕವಾಗಿ ಗಮನಿಸುತ್ತಾ, ಸಹಜ ’ ಶ್ವಾಸ ’ವನ್ನೇ ನಾವು ಗಮನವಾಗಿ ಮಾಡಿದಾಗ, ಚಿತ್ತ ತನ್ನಷ್ಟಕ್ಕೆ ತಾನೇ ಶೂನ್ಯವಾಗುತ್ತದೆ. ಚಿತ್ತದಲ್ಲಿರುವ ಶೂನ್ಯ ಪ್ರದೇಶವು, ಸಮೃದ್ಧಿಯಾಗಿ ಎಲ್ಲಾಕಡೆ ಇರುವ ವಿಶ್ವಪ್ರಾಣಶಕ್ತಿಯನ್ನು ಆಕರ್ಷಿಸುತ್ತದೆ. ಕ್ರಮಕ್ರಮವಾಗಿ, ದಿವ್ಯಚಕ್ಷುವು ಉತ್ತೇಜಿತವಾಗಿ, ಜೀವಾತ್ಮನು ಗಣನೀಯವಾಗಿ ಶಕ್ತಿಯುತನನ್ನಾಗಿ ಮಾಡುತ್ತದೆ.

“ಶ್ವಾಸ … ಧ್ಯಾನಶಾಸ್ತ್ರ … “

ನಮಗಿರುವ ಎರಡು ಭೌತಿಕ ಚಕ್ಷುಗಳ ಜೊತೆ ನಮ್ಮೆಲ್ಲರಿಗೂ ಒಂದು ದಿವ್ಯಚಕ್ಷು, ’ತ್ರಿನೇತ್ರ’ ಸಹ ಇರುತ್ತದೆ. ಭೌತಿಕ ಶರೀರದ ಹಾಗೆ ನಮಗೊಂದು ಸೂಕ್ಷ್ಮಶರೀರ ಕೂಡಾ ಇರುತ್ತದೆ. ಆದರೆ, ಇಂತಹ ಸತ್ಯಗಳೆಲ್ಲಾ ನಮಗೆ ’ಶ್ವಾಸ’ದಿಂದ ಮಾತ್ರವೇ ಅರ್ಥವಾಗುತ್ತದೆ. ’ಶ್ವಾಸ’ದ ಮೇಲೆ ’ಗಮನ’ವನ್ನು ಪ್ರತಿನಿತ್ಯ ಸಾಧನೆ ಮಾಡುವುದನ್ನೇ ’ಧ್ಯಾನ’ ಎನ್ನುತ್ತಾರೆ. ಹೀಗೆ ಧ್ಯಾನವನ್ನು ಇನ್ನೂ ಹೆಚ್ಚಾಗಿ ಸಾಧನೆ ಮಾಡುತ್ತಾ ನಾವು ಧ್ಯಾನಶಾಸ್ತ್ರದ ಸಮಗ್ರ ಚಿತ್ರವನ್ನು ಅರ್ಥಮಾಡಿಕೊಳ್ಳಬಹುದು.

 

“ಧ್ಯಾನಶಾಸ್ತ್ರ … ಆತ್ಮಶಾಸ್ತ …”

ಧ್ಯಾನದಿಂದ ನಾವು ನಮ್ಮ ಗತವನ್ನು, ಭವಿಷ್ಯತ್ತನ್ನೂ ಕೂಡಾ ದರ್ಶಿಸಬಹುದು… ಅದರಿಂದ ನಾವು ಅನೇಕ ಶರೀರಗಳನ್ನು ಬದಲಾಯಿಸುತ್ತಾ, ಅನೇಕ ಅನುಭವಗಳನ್ನು ಹೊಂದುತ್ತಾ ಅನಾದಿಯಿಂದ ಬರುತ್ತಿರುವ ಶಾಶ್ವತ ಜೀವಿಗಳು ಎಂಬುವ ವಿಷಯವನ್ನು, ಅನುಭವಪೂರ್ವಕವಾಗಿ ಕೊನೆಗೆ ಅರ್ಥಮಾಡಿಕೊಳ್ಳುತ್ತೇವೆ…

 

“ಅಯಮಾತ್ಮಾ ಬ್ರಹ್ಮ”

“ಅಹಂ ಬ್ರಹ್ಮಾಸ್ಮಿ”

“ತತ್ತ ಮಸಿ”

“ಎಲ್ಲಾಕಡೆ ವ್ಯಾಪಿಸಿರುವುದು ನಾವೇ” ಎಂದು

“ನಾವು ಶಾಶ್ವತವಾದ ಸೃಷ್ಟಿಕರ್ತರು” ಈ ರೀತಿಯಾದ ಮಹಾಕಾವ್ಯಗಳೆಲ್ಲಾ ನಮಗೆ ಚೆನ್ನಾಗಿ ಅರ್ಥವಾಗುತ್ತವೆ. ಇಂತಹ ಅರಿವಿನ ಸಾರಾಂಶವನ್ನೇ “ಆತ್ಮಶಾಸ್ತ್ರ” ಎನ್ನುತ್ತೇವೆ.

“ಶ್ವಾಸ” ದ ಮೂಲಕ ಧ್ಯಾನಶಾಸ್ತ್ರವನ್ನೂ, “ಧ್ಯಾನಶಾಸ್ತ್ರ” ದ ಮೂಲಕವೇ “ಆತ್ಮಶಾಸ್ತ್ರವನ್ನು” ನಾವು ಅರ್ಥಮಾಡಿಕೊಳ್ಳಲಾಗುತ್ತದೆ. ಈ ಆತ್ಮಶಾಸ್ತ್ರವನ್ನು ಪರಿಪೂರ್ಣವಾಗಿ ಗ್ರಹಿಸಿದ ನಂತರವೇ ಒಬ್ಬ ವ್ಯಕ್ತಿಗೆ ಸರಿಯಾದ ಮಾತು, ಸರಿಯಾದ ಆಹಾರದ ಅಭ್ಯಾಸಗಳು, ಸರಿಯಾದ ಸ್ಪರ್ಶ, ಸರಿಯಾದ ನಡಿಗೆ, ಸರಿಯಾದ ಭಾವನೆಗಳು … ಹೀಗೆ ಒಂದೊಂದಾಗಿ ಜೀವನಕ್ಕೆ ಸಂಬಂಧಿಸಿದ ಪ್ರತಿ ಅಂಶವೂ… ಒಟ್ಟಾಗಿ ಸರಿಯಾದ ಜೀವನ ವಿಧಾನ ಅಭ್ಯಾಸವಾಗುತ್ತದೆ. ಇದನ್ನೇ ಎನ್‌ಲೈಟೆನ್‌ಮೆಂಟ್.. ದಿವ್ಯಜ್ಞಾನ ಪ್ರಕಾಶ .. ಎನ್ನುತ್ತಾರೆ … ಇದೇ ಆಧ್ಯಾತ್ಮಿಕತೆ ಎಂದರೆ.

 

“ಆತ್ಮಶಾಸ್ತ್ರ … ಎಲ್ಲಾ ಮತಗಳು … “

’ಮತ’ ಎಂದರೆ ’ ಪುನಃ ಏಕತ್ವ ’ ಎಂದರ್ಥ… ಎಲ್ಲಾ ಮತಗಳ ನಿಜವಾದ ಪ್ರಕಾಶತ್ವ ಅದೇ. ಸಕಲ ಪ್ರಾಣಿಕೋಟಿ ಎಲ್ಲರಲ್ಲಿರುವ ಏಕತ್ವವನ್ನು ದರ್ಶಿಸಲಾಗುವುದು … ಆ ಅರಿವನ್ನು ಇಟ್ಟುಕೊಂಡು ಜೀವಿಸಲಾಗುವುದು. ಪ್ರತಿ ಮತವೂ ಆತ್ಮಶಾಸ್ತ್ರ ದ ಪೂರ್ಣ ಸತ್ಯವನ್ನು ಆಧರಿಸಿಯೇ ಉದ್ಭವಿಸಿದೆ. ಆತ್ಮಶಾಸ್ತ್ರದಿಂದ ಮಾತ್ರವೇ ನಾವೆಲ್ಲರೂ ಅಂತಹ ಎಲ್ಲಾ ಮತಗಳ ಜೊತೆಯೂ ಏಕತ್ವವನ್ನು ಸಾಧಿಸಬಲ್ಲೆವು.

ಅದೇ ರೀತಿಯಲ್ಲಿ ನಮಗೆ ಯಾವುದೇ ರೀತಿಯ ಮಿತಿಗಳು, ಪರಿಧಿಗಳಿಲ್ಲ (ಎಲ್ಲೆಗಳಿಲ್ಲ) ಎಂಬುವ ಸತ್ಯವನ್ನು ನಾವು ಆತ್ಮಾನುಭವದಿಂದ ಗ್ರಹಿಸಬಲ್ಲೆವು.

ಅದೇ ತರಹ ಆತ್ಮತತ್ವವನ್ನು ಅನುಭವಿಸಬೇಕಾದರೆ, ನಾವು ಶ್ವಾಸತತ್ವಕ್ಕೆ ಸೇರಿರಬೇಕು. ಅದೇ ನಿಜವಾದ ಕೇಂದ್ರಬಿಂದು.