” ಅವರವರ ಗುರಿಗಳ ಕಡೆಗೆ ಅವರವರೇ ನಾವಿಕರು “

ಇದುವರೆಗೂ ನಮಗೆ ತಿಳಿಯದೇ ಇರುವುದನ್ನು ಶ್ರದ್ಧೆಯಿಂದ, ಗುರಿಯಿಂದ ತಿಳಿದುಕೊಂಡನಂತರ … ಇನ್ನು ಅದನ್ನು ಅಚರಣೆಯಿಂದ ಸಾಣೆಹಿಡಿಯುತ್ತಾ ಅಭ್ಯಾಸ ಮಾಡಬೇಕು. ಅದಕ್ಕೆ ಇರುವ ಏಕೈಕ ಮಾರ್ಗವೇ ’ಶ್ವಾಸದ ಮೇಲೆ ಗಮನ’, ಅದೇ ಧ್ಯಾನ ಅನೇಕ ವಿಧಗಳಲ್ಲಿ ಓಡುವ ಈ ಮನಸ್ಸನ್ನು ಧ್ಯಾನದ ಮೂಲಕ ಶ್ವಾಸದ ಮೇಲೆ ಇರಿಸಿ… ಏಕಾಗ್ರತೆಗೊಳಿಸಬೇಕು. ಅನಂತರ … ಒಂದೊಂದು ಮೆಟ್ಟಿಲನ್ನು ಹತ್ತುತ್ತಾ .. ಆತ್ಮೋನ್ನತಿ ಪಥದಲ್ಲಿ ಪ್ರಯಾಣ ಬಳಸಬೇಕು.

ಯಾರಿಗೆ ’ಗುರಿ ಇರುವುದಿಲ್ಲವೊ’ ಅವರಿಗೆ ಅದೇ ಶತ್ರು … ಯಾರಿಗೆ ’ಗುರಿ ಇರುತ್ತದೆಯೊ’ ಅವರಿಗೆ ಅದೇ ಮಿತ್ರ … ಆದ್ದರಿಂದ, ಎಲ್ಲರೂ ಅವರವರ ’ಗುರಿ’ಯಿಂದ ಅವರು ತಮ್ಮ ತಮ್ಮ ಆತ್ಮಗಳನ್ನು ಉದ್ಧರಿಸಿಕೊಳ್ಳಬೇಕು ಎಂದು ಭಗವದ್ಗೀತೆ ಮೂಲಕ ಶ್ರೀಕೃಷ್ಣ ಪರಮಾತ್ಮ ಎಲ್ಲಾ ಮಾನವಕುಲಕ್ಕೆ ತಿಳಿಸಿದರು.

ನಾನು ಸಹ ನನಗೆ ತಿಳಿದಿರುವ ವಿಷಯಗಳನ್ನು … ಅಂದರೆ, ನಾನು ಶ್ರದ್ಧೆಯಿಂದ ಕಲಿತುಕೊಂಡಿರುವ ವಿಷಯಗಳನ್ನು ನಿಮ್ಮ ಕಿವಿಯವರೆಗೂ ಕೇಳಿಸುವ ಹಾಗೆ ಮಾಡಬಲ್ಲೆ … ಆದರೆ, ನಿಮ್ಮ ಮಿದುಳಿನಲ್ಲಿ ಹೋಗುವ ಹಾಗೆ ಮಾಡಲಾರೆ; ನಿಮ್ಮ ’ಗುರಿ’, ನಿಮ್ಮ ’ಶ್ರದ್ಧೆ’, ಮತ್ತು ’ಕಲಿತುಕೊಳ್ಳಬೇಕು’ ಎನ್ನುವ ನಿಮ್ಮ ಧನಾತ್ಮಕತೆಯೇ ಅದನ್ನು ನಿಮ್ಮ ಮಿದುಳಿನೊಳಗೆ ಹೋಗುವ ಹಾಗೆ ಮಾಡುತ್ತದೆ.

ಗುರು ಎಂದರೆ ಭಾರವಾಗಿರುವವನು …

ಧ್ಯಾನಾಭ್ಯಾಸಕ್ಕೆ ಬರುವುದಕ್ಕಿಂತಾ ಮುಂಚೆ ಕೂಡಾ ನಾವು ಲೌಕಿಕ ವಿಷಯಗಳ ಮೇಲೆ… ಹಣ ಸಂಪಾದನೆ ಮುಂತಾದ ಪ್ರಾಪಂಚಿಕ ವ್ಯವಹಾರಗಳ ಮೇಲೆ… ’ಗುರಿ’ ಚೆನ್ನಾಗಿಯೇ ಇಟ್ಟಿದ್ದೇವೆ. ಆದರೆ, ಅವೆಲ್ಲಾ ಕೂಡಾ ನಮ್ಮನ್ನು ಇನ್ನೂ ’ಹಗುರಾಗಿ’ ಮಾಡುತ್ತಾ ನಮ್ಮ ದುಃಖಕ್ಕೆ ಕಾರಣವಾಗಿವೆ. ಈಗ ಧ್ಯಾನದಲ್ಲಿ ಬಂದನಂತರ ನಮ್ಮ ’ಗುರಿ’ ಎಲ್ಲವನ್ನೂ ’ಪರಬ್ರಹ್ಮತ್ವ’ದ ಮೇಲೆ ಇಟ್ಟಿದ್ದೇವೆ ಮತ್ತು ಅನಂತವಾದ ’ಆತ್ಮಜ್ಞಾನ’ದ ಮೇಲೆ ಇಟ್ಟಿದ್ದೇವೆ. ಕ್ರಮೇಣ ಅವು ನಮ್ಮಲ್ಲಿ ಏಕಾಗ್ರತೆಯನ್ನು ಹೆಚ್ಚಿಸುವುದರಿಂದ ಗುರುತ್ವದಿಂದ ಕೂಡಿದ ಆಧ್ಯಾತ್ಮಿಕ ಮೇಧಸ್ಸಿನಿಂದ ನಾವು ’ಭಾರವಾಗಿ’ ರೂಪುಗೊಳ್ಳುತ್ತಿರುತ್ತೇವೆ.

ಸತ್ಯಭಾಮಾದೇವಿ ನವರತ್ನಗಳಿಂದ ಕೂಡಿರುವ ಒಡೆವೆಗಳನ್ನು ತಕ್ಕಡಿಯಲ್ಲಿ ಹಾಕಿದರೂ ಗುರುತ್ವದಿಂದ ಪೂರ್ಣವಾಗಿರುವ ಶ್ರೀಕೃಷ್ಣನ ಭಾರಕ್ಕೆ ಅವುಗಳನ್ನು ತೂಗಿಸಲಾಗಲಿಲ್ಲ. ಆದರೆ, ’ಶ್ರದ್ಧೆ’ ’ಗುರಿ’ ಮಿಳಿತವಾಗಿರುವ ಹೃದಯದಿಂದ ರುಕ್ಮಿಣೀದೇವಿ ವಿನಯದಿಂದ ಒಂದು ತುಲಸೀದಳವನ್ನು ತಕ್ಕಡಿಯಲ್ಲಿ ಹಾಕಿದ ತಕ್ಷಣ ಅಂತಹ ಶ್ರೇಷ್ಠ ಶ್ರೀಕೃಷ್ಣಪರಮಾತ್ಮ ಸಹ ಸರಿತೂಗಿದ.

ಆದ್ದರಿಂದ, ’ಗುರಿ’ಯಿಂದ ಕೂಡಿರುವ ’ಗುರುತ್ವ’ ಎಷ್ಟು ಅಧಿಕವಾಗಿರುತ್ತದೆಯೊ… ನಮ್ಮಲ್ಲಿ ಅಷ್ಟಷ್ಟು ಸಹನೆ, ಸ್ಥಿರತ್ವ, ಧರ್ಮವರ್ತನೆ, ಮನೋನಿರ್ಭರತೆ ಅಂತಹ ದಿವ್ಯಲಕ್ಷಣಗಳು ಉಂಟಾಗಿ ಇನ್ನೂ ಹೆಚ್ಚಾಗಿ ವೃದ್ಧಿಯಾಗುತ್ತಿರುತ್ತದೆ. ಪ್ರತಿಕ್ಷಣ ನಮ್ಮ ಬಾಯಿಂದ ಜ್ಞಾನಪೂರ್ವಕವಾದ ಮಾತುಗಳೇ ಬರುತ್ತಿರುತ್ತವೆ. ಮತ್ತು ಪೂರ್ಣ ಅರಿವಿನಿಂದ ಕೂಡಿರುವ ಆತ್ಮಜ್ಞಾನದಿಂದ ನಾವು ಸದಾ ಬೆಳಗುತ್ತಿರುತ್ತೇವೆ.

ಗಾಂಧೀ ಮಹಾತ್ಮ ಅವರು ಸಬ್ ಕೋ ಸನ್ಮತಿ ದೇ ಭಗವಾನ್ ಎನ್ನುತ್ತಾ ಸಮಸ್ತ ಮಾನವಕುಲದ ಪರವಾಗಿ ಪ್ರಾರ್ಥಿಸಿದರು. ಭಗವತ್ ತತ್ವ ಅಂದರೆ, ನಮ್ಮ ಚರ್ಮಚಕ್ಷುಗಳಿಗೆ ಕಾಣದ ಸಮಸ್ತ ಉನ್ನತ ಆತ್ಮಗಳ ಬೃಹತ್ ಸಮುದಾಯ ಸದಾ ನಮಗೆ ಮತಿಯನ್ನು ಧಾರಾಕಾರವಾಗಿ ನೀಡುತ್ತಲೇ ಇದೆ. ಆದರೆ, ಅದನ್ನು ಸ್ವೀಕರಿಸುವ ಧನ್ಯತೆಯಿಂದ ನಾವು ಕೂಡಾ ಸಿದ್ಧರಾಗಿರಬೇಕು.

ಹಾಗೆ ನಾವು ಸಿದ್ಧವಾಗಿರುವಾಗ ಈ ಸೃಷ್ಟಿಯಲ್ಲಿ ವ್ಯಕ್ತವಾಗಿರುವ ಪ್ರತಿಯೊಂದು ಕೂಡಾ ಒಬ್ಬ ಗುರುವಿನ ಹಾಗೆ ನಮಗೆ ಹೇಳಿಕೊಡುತ್ತಲೇ ಇರುತ್ತದೆ. ಸಿಂಹದಿಂದ ಗಂಭೀರತೆಯನ್ನು, ನವಿಲಿನಿಂದ ಸೊಗಸನ್ನು, ಪಾರಿವಾಳದಿಂದ ಶಾಂತತೆಯನ್ನು, ಇರುವೆಯಿಂದ ಕ್ರಮಶಿಕ್ಷಣವನ್ನು ಕಲಿತುಕೊಳ್ಳಬೇಕು. ಅವೆಲ್ಲಾ ಕೇವಲ ಅವುಗಳಿಗೆ ಮಾತ್ರ ಸೀಮಿತವಲ್ಲ. ಕಲಿತುಕೊಳ್ಳಬೇಕು ಎನ್ನುವ ತವಕ ಇದ್ದರೆ ಅವೆಲ್ಲಾ ನಮಗೆ ಕೂಡಾ ಬಂದುಬಿಡುತ್ತವೆ.

ಅಷ್ಟೇ ಅಲ್ಲ ಜೀವನದಲ್ಲಿ ಎದುರಾಗುವ ಪ್ರತಿಕ್ಷಣ, ಎದುರಾಗುವ ಪ್ರತಿಯೊಬ್ಬ ವ್ಯಕ್ತಿ, ಪ್ರತಿ ಒಂದು ಘಟನೆ ಎಲ್ಲವೂ ಸಹ ಒಬ್ಬ ಗುರುವಿನ ಹಾಗೆ ನಮಗೆ ಜ್ಞಾನವನ್ನು ನೀಡುತ್ತಲೇ ನಮ್ಮನ್ನು ಪ್ರತಿಕ್ಷಣ ಅಭಿವೃದ್ಧಿಗೊಳಿಸುತ್ತಲೇ ಇರುತ್ತವೆ. ಈ ಎಲ್ಲಾ ವಿಷಯಗಳ ಮೇಲೆ ನಮಗೆ ಸ್ಪಷ್ಟವಾದ ಅವಗಾಹನೆ ಉಂಟಾಗಬೇಕಾದರೆ ನಿರಂತರ ಧ್ಯಾನಸಾಧನೆ ತಪ್ಪದೆ ಮಾಡಬೇಕು.

ಪ್ರತಿಯೊಬ್ಬರೂ ಸಹ ಅವರಿಗವರೆ ತಮ್ಮಲ್ಲಿರುವ ’ಗುರಿ’ತತ್ವಕ್ಕೆ … ’ಶ್ರದ್ಧಾ’ತತ್ವಕ್ಕೆ … ಧ್ಯಾನ ಸಾಧನೆಯಿಂದ, ಜ್ಞಾನಾರ್ಜನೆ ಮೂಲಕ ವಿಶೇಷವಾಗಿ ಸಾಣೆಹಿಡಿಯುತ್ತಾ… ಗುರುಗಳಾಗಿ ಬದಲಾಗಲೇಬೇಕು. ನಿರಂತರ ಧ್ಯಾನಾಭ್ಯಾಸದ ಮೂಲಕ ದಿವ್ಯಚಕ್ಷುವನ್ನು ಸಂಪಾದಿಸಿಕೊಳ್ಳಬಲ್ಲವರಾಗಬೇಕು… ಆತ್ಮಸಂದೇಶಗಳನ್ನು ಕೇಳಿಸಿಕೊಳ್ಳುವರಾಗಬೇಕು… ಮತ್ತು ಅವುಗಳನ್ನು ತಮ್ಮ ನಿಜ ಜೀವನದಲ್ಲಿ ಅಭ್ಯಾಸ ಮಾಡುತ್ತಾ ಶುಭಾಶುಭಗಳನ್ನು ಸಾಕ್ಷೀಭೂತವಾಗಿ ಗಮನಿಸುತ್ತಿರಬೇಕು.

ಗುರುತ್ವದಿಂದ ಇರುವವರೆಲ್ಲರಿಗೂ … ಧ್ಯಾನವಂದನೆಗಳು